
13th June 2025
ಬೆಂಗಳೂರು ನಗರ ಜಿಲ್ಲೆ, ಜೂ.13 (ಕರ್ನಾಟಕ ವಾರ್ತೆ): ಅಬಕಾರಿ ಇಲಾಖೆಯ ಬೆಂಗಳೂರು ಉತ್ತರ ವಿಭಾಗದ ಅಬಕಾರಿ ಜಂಟಿ ಆಯುಕ್ತರಾದ ಫಿರೋಜ್ ಖಾನ್ ಖಿಲ್ಲೇದಾರ್, ಬೆಂಗಳೂರು ನಗರ ಜಿಲ್ಲೆ-3 ಅಬಕಾರಿ ಉಪ ಆಯುಕ್ತರು ಡಾ.ಕೆ.ಎಸ್.ಮುರಳಿ, ಉಪವಿಭಾಗ-05 ಅಬಕಾರಿ ಉಪ ಅಧೀಕ್ಷಕರಾದ ಸಿ.ಲಕ್ಷ್ಮೀಶ, ಕಂದಾಯ, ಕೆ.ಎಸ್.ಬಿ.ಸಿ.ಎಲ್ ಹಾಗೂ ಇಲಾಖಾ ಅಧಿಕಾರಿಗಳ ಮತ್ತು ಸಿಬ್ಬಂದಿ ವರ್ಗದವರ ಸಮಕ್ಷಮದಲ್ಲಿ ಜಪ್ತು ಪಡಿಸಿದ ಅಕ್ರಮ ವಿದೇಶಿ ಮದ್ಯವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿದ್ದು ಜೂನ್ 12 ರಂದು ಅಲೈಡ್ ಬ್ಲೆಂಡರ್ಸ್ ಮತ್ತು ಡಿಸ್ಟಿಲರೀಸ್ ಪರಾಂಗಣದಲ್ಲಿ ಒಟ್ಟು 516 ಬಾಟಲ್ ಗಳಲ್ಲಿ ಇದ್ದಂತಹ 516 ಲೀಟರ್ ವಿದೇಶಿ ಮದ್ಯವನ್ನು, ಸಿಗರೇಟ್ ಜಪ್ತು ಪಡಿಸಿದ ಖಾಲಿ ಬಾಟಲ್ ಗಳನ್ನು ನಾಶ ಪಡಿಸಲಾಯಿತು, ನಾಶ ಪಡಿಸಿದ ವಸ್ತುಗಳ ಒಟ್ಟು ಮೌಲ್ಯ 39 ಲಕ್ಷ ರೂಗಳು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಅಂದಾಜು 30 ಲಕ್ಷ ನಷ್ಟ ಉಂಟಾಗುವುದನ್ನು ತಡೆಯಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಮಾನವನ ಸೇವನೆಗೆ ಯೋಗ್ಯವಲ್ಲದ 362.14 ಲೀಟರ್ ಮದ್ಯ, ವೈನ್ ಹಾಗೂ ಬಿಯರ್ ನ್ನು ನಾಶಪಡಿಸಲಾಗಯಿತು ಎಂದು ಬೆಂಗಳೂರು ನಗರ ಜಿಲ್ಲೆ-3 ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತುಂಗಭದ್ರಾ ಜಲಾಶಯದ ೧೯ನೇ ಗೇಟ್ ಎಲ್ಲಾ ಗೇಟ್ ಗಳ ಜೊತೆ ಮುಂದಿನ ರ್ಷವೇ ಬದಲಾಯಿಸಿ : ದರೂರು ಪುರುಷೋತ್ತಮ್ ಗೌಡ
ಪುದುಚೇರಿ ವಿಧಾನಸಭೆಗಾಗಿ ರಾಷ್ಟ್ರೀಯ ಇ-ವಿಧಾನ್ ಅಪ್ಲಿಕೇಶನ್ (ಓeಗಿಂ) ಡಿಜಿಟಲ್ ಪ್ಲಾಟ್ಫರ್ಮ್ ಅನ್ನು ಕೇಂದ್ರ ಸಚಿವರಾದ ಡಾ. ಎಲ್. ಮುರುಗನ್ ಉದ್ಘಾಟಿಸಿದರು